ಗಂಗಾವತಿ: ತಾಲೂಕಿನಲ್ಲಿ ಸಂಘಟನಾತ್ಮಕ ಶಕ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ಅಖಂಡ ಗಂಗಾವತಿ ತಾಲೂಕು ಸಂಘವನ್ನು ಅಧಿಕೃತವಾಗಿ ರಚಿಸಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಕ್ರಿಯಾಶೀಲ ವ್ಯಕ್ತಿತ್ವದ ಶ್ರೀ ಶಂಷೀರ್ ಅಲಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಸಂಘದ ರಚನೆಗಾಗಿ ಶ್ರಮಿಸಿದ ಶಂಷೀರ್ ಅವರು ಮತ್ತು ಅವರ ತಂಡಕ್ಕೆ PDO ವಲಯ ಹಾಗೂ ಸಂಘದ ಸದಸ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ನೂತನ ಪದಾಧಿಕಾರಿಗಳ ವಿವರ:
ಸಂಘದ ವಿವಿಧ ಜವಾಬ್ದಾರಿಗಳಿಗೆ ಈ ಕೆಳಗಿನವರನ್ನು ಆಯ್ಕೆ ಮಾಡಲಾಗಿದೆ:
ತಾಲೂಕು ಅಧ್ಯಕ್ಷರು: ಶ್ರೀ ಶಂಷೀರ್ ಅಲಿ
ಪ್ರಧಾನ ಕಾರ್ಯದರ್ಶಿಗಳು: ಶ್ರೀ ಬಸವರಾಜ್ ಸಂಕನಾಳ್
ಖಜಾಂಚಿ: ಶ್ರೀ ಕೃಷ್ಣಪ್ಪ (ಹಿರಿಯರು)
ಗೌರವಾಧ್ಯಕ್ಷರು: ಶ್ರೀ ಮಲ್ಲಿಕಾರ್ಜುನ್ ಕಡಿವಾಳ (ಹಿರಿಯರು)
ಸಂಘಟನಾ ಕಾರ್ಯದರ್ಶಿಗಳು: ಶ್ರೀ ಲಕ್ಷ್ಮಣ್, ಶ್ರೀ ಜಿಲ್ಲಾನ್ ಪಾಷಾ, ಶ್ರೀಮತಿ ಭಾಗ್ಯಶ್ರೀ ಮೇಡಂ ಹಾಗೂ ಶ್ರೀಮತಿ ಶರಣಮ್ಮ ಮೇಡಂ.
ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಸಂಘದ ಹಿತೈಷಿಗಳು "ತುಂಬು ಹೃದಯದ ಅಭಿನಂದನೆಗಳು" ಸಲ್ಲಿಸಿದ್ದು, ಸಂಘವು ಮುಂದಿನ ದಿನಗಳಲ್ಲಿ ಶಕ್ತಿಯುತವಾಗಿ ಬೆಳೆಯಲಿ ಎಂದು ಆಶಿಸಿದ್ದಾರೆ.

No comments:
Post a Comment