ಬೆಂಗಳೂರು: ಕರ್ನಾಟಕ ರಾಜ್ಯ ನಾಗರಿಕ ಸೇವಾ ಸಂಘಗಳು ಯಾವುದೇ ರೀತಿಯ ವಾಣಿಜ್ಯ ಅಥವಾ ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸಿ ರಾಜ್ಯ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ
ನಿಯಮಕ್ಕೆ ತಿದ್ದುಪಡಿ
ಕರ್ನಾಟಕ ನಾಗರಿಕ ಸೇವೆಗಳ (ಸೇವಾ ಸಂಘಗಳ ಮಾನ್ಯತೆ) ನಿಯಮಗಳು, 2015ರ ನಿಯಮ 4ಕ್ಕೆ ಹೊಸದಾಗಿ ತಿದ್ದುಪಡಿ ತರಲಾಗಿದ್ದು, ಖಂಡ (17) ಅನ್ನು ಸೇರ್ಪಡೆಗೊಳಿಸಲಾಗಿದೆ
"ಯಾವುದೇ ಒಂದು ಅಧಿಕೃತ ಸೇವಾ ಸಂಘವು ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಲ್ಲಿ ಭಾಗಿಯಾಗತಕ್ಕದಲ್ಲ."
ಸದಸ್ಯರ ಕಲ್ಯಾಣ ಕಾರ್ಯಗಳಿಗೆ ವಿನಾಯಿತಿ
ಆದಾಗ್ಯೂ, ಈ ನಿಯಮಕ್ಕೆ ಸ್ಪಷ್ಟನೆಯೊಂದನ್ನು ನೀಡಲಾಗಿದ್ದು, ಸೇವಾ ಸಂಘಗಳು ಯಾವುದೇ ಲಾಭದ ಉದ್ದೇಶ ಅಥವಾ ಆರ್ಥಿಕ ಗಳಿಕೆಯ ಹಂಬಲವಿಲ್ಲದೆ, ತಮ್ಮ ಸದಸ್ಯರ ಕಲ್ಯಾಣಕ್ಕಾಗಿ ಕೈಗೊಳ್ಳುವ ಚಟುವಟಿಕೆಗಳನ್ನು 'ವಾಣಿಜ್ಯ ಚಟುವಟಿಕೆ' ಎಂದು ಪರಿಗಣಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ
ಪ್ರಕ್ರಿಯೆ ಹಿನ್ನೆಲೆ
ಈ ನಿಯಮದ ಕರಡನ್ನು ಫೆಬ್ರವರಿ 18, 2026 ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿ, ಬಾಧಿತರಾಗುವವರಿಂದ 15 ದಿನಗಳ ಒಳಗೆ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿತ್ತು
ಈ ನಿಯಮಗಳಿಗೆ "ಕರ್ನಾಟಕ ನಾಗರಿಕ ಸೇವೆಗಳು (ಸೇವಾ ಸಂಘಗಳ ಮಾನ್ಯತೆ) (ತಿದ್ದುಪಡಿ) ನಿಯಮಗಳು, 2026" ಎಂದು ಹೆಸರಿಸಲಾಗಿದ್ದು, ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದಲೇ ಇವು ತಕ್ಷಣಕ್ಕೆ ಜಾರಿಗೆ ಬರಲಿವೆ

No comments:
Post a Comment