ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಇನ್ನು ಮುಂದೆ ತಮ್ಮ ನಾಮಪತ್ರದ ಜೊತೆಗೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ತಮ್ಮ ಅನರ್ಹತೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಘೋಷಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗವು ಆದೇಶಿಸಿದೆ
ಹೊಸ ನಿಯಮವೇನು?
ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ SECK/ULB/OTHR/1/2026-ULB ಅನ್ವಯ, ಪ್ರಮಾಣ ಪತ್ರದ ಭಾಗ-ಎ ಮತ್ತು ಭಾಗ-ಬಿ ನಲ್ಲಿ ಈ ಕೆಳಕಂಡ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ
ಅನರ್ಹತೆಯ ಘೋಷಣೆ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993, ಕರ್ನಾಟಕ ಪೌರಸಭೆಗಳ ಅಧಿನಿಯಮ 1964, ಅಥವಾ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ಮತ್ತು ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024 ರ ಅಡಿಯಲ್ಲಿ ಯಾವುದೇ ಶಾಸನಬದ್ಧ ಪ್ರಾಧಿಕಾರದಿಂದ ತಾವು ಅನರ್ಹಗೊಂಡಿಲ್ಲ ಎಂಬ ವಿವರವನ್ನು ನೀಡಬೇಕು
. ಹಳೆಯ ಪ್ರಕರಣಗಳ ಮಾಹಿತಿ: ಒಂದು ವೇಳೆ ಅಭ್ಯರ್ಥಿಯು ಈ ಹಿಂದೆ ಅನರ್ಹಗೊಂಡಿದ್ದು, ಆ ಅನರ್ಹತಾ ಅವಧಿಯು ಈಗಾಗಲೇ ಪೂರ್ಣಗೊಂಡಿದ್ದರೂ ಸಹ, ಆ ಪ್ರಕರಣದ ಸಂಖ್ಯೆ, ಅನರ್ಹಗೊಳಿಸಿದ ಪ್ರಾಧಿಕಾರ ಮತ್ತು ಆದೇಶದ ದಿನಾಂಕವನ್ನು ಸ್ಪಷ್ಟವಾಗಿ ನಮೂದಿಸಬೇಕು
.
ಪ್ರಮಾಣ ಪತ್ರ ಸಲ್ಲಿಸುವ ವಿಧಾನ ಮತ್ತು ಶುಲ್ಕ
ಚುನಾವಣಾ ಆಯೋಗವು ಅಭ್ಯರ್ಥಿಗಳಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿದೆ:
ನಗರ ಸ್ಥಳೀಯ ಸಂಸ್ಥೆಗಳು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ನಗರ ಪಾಲಿಕೆಗಳು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ ಬ್ಯಾಂಕ್ಗಳಿಂದ ಪಡೆದ ದಸ್ತಾವೇಜು ಹಾಳೆಯಲ್ಲಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು
. ಗ್ರಾಮ ಪಂಚಾಯಿತಿ: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವವರು ಬಿಳಿ ಹಾಳೆಯ ಮೇಲೆ ಮಾಹಿತಿ ಸಿದ್ಧಪಡಿಸಿ ಚುನಾವಣಾಧಿಕಾರಿ ಮುಂದೆ ಸಹಿ ಮಾಡಬಹುದು. ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ
.
ಯಾವೆಲ್ಲಾ ವಿವರಗಳು ಇರಬೇಕು?
ಅಭ್ಯರ್ಥಿಗಳು ತಮ್ಮ ಪ್ರಮಾಣ ಪತ್ರದಲ್ಲಿ ಈ ಕೆಳಗಿನ ಮಾಹಿತಿಯನ್ನು ಕಡ್ಡಾಯವಾಗಿ ಒದಗಿಸಬೇಕೆಂದು ಆಯೋಗ ಸೂಚಿಸಿದೆ:
ಆರ್ಥಿಕ ವಿವರ: ಅಭ್ಯರ್ಥಿ, ಪತಿ/ಪತ್ನಿ ಮತ್ತು ಅವಲಂಬಿತರ ಪಾನ್ (PAN) ಸಂಖ್ಯೆ ಹಾಗೂ ಕಳೆದ ಐದು ವರ್ಷಗಳ ಆದಾಯ ತೆರಿಗೆ ಪಾವತಿಯ ವಿವರ
. ಆಸ್ತಿ ಮತ್ತು ಸಾಲ: ಚರಾಸ್ತಿ, ಸ್ಥಿರಾಸ್ತಿ ಮತ್ತು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳ ಪೂರ್ಣ ಮಾಹಿತಿ
. ಕ್ರಿಮಿನಲ್ ಹಿನ್ನೆಲೆ: ಈ ಹಿಂದೆ ಶಿಕ್ಷೆಯಾದ ಪ್ರಕರಣಗಳು ಅಥವಾ ನ್ಯಾಯಾಲಯದಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ವಿವರ
. ಶೈಕ್ಷಣಿಕ ಅರ್ಹತೆ: ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿವರಗಳೊಂದಿಗೆ ವಿದ್ಯಾರ್ಹತೆಯ ಮಾಹಿತಿ
.
ಈ ಘೋಷಣಾಪತ್ರದಲ್ಲಿ ಯಾವುದೇ ಸುಳ್ಳು ಮಾಹಿತಿ ನೀಡುವುದು ಅಥವಾ ವಿಷಯಗಳನ್ನು ಮರೆಮಾಚುವುದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಎಚ್ಚರಿಸಿದೆ
No comments:
Post a Comment