ಯಾದಗಿರಿ: ಜಿಲ್ಲೆಯ ಹುಣಸಗಿ ಮತ್ತು ಶಹಾಪುರ ತಾಲೂಕುಗಳಲ್ಲಿ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನೂತನ ತಾಲೂಕು ಸಂಘಗಳನ್ನು ರಚಿಸಲಾಗಿದ್ದು, ವಿವಿಧ ಜವಾಬ್ದಾರಿಗಳಿಗೆ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷರಾದ ಮಲ್ಲಿಕಾರ್ಜುನ ಯಾದಗಿರಿ ಅವರು ತಿಳಿಸಿದ್ದಾರೆ.
೧. ಹುಣಸಗಿ ತಾಲೂಕು ಪದಾಧಿಕಾರಿಗಳ ಪಟ್ಟಿ:
ಸಂಘಟನೆಯ ಹಿತದೃಷ್ಟಿಯಿಂದ ಈ ಕೆಳಗಿನವರನ್ನು ಆಯ್ಕೆ ಮಾಡಲಾಗಿದ್ದು, ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
- ಗೌರವಾಧ್ಯಕ್ಷರು: ಶ್ರೀ ಮಲ್ಲನಗೌಡ ಪಾಟೀಲ
- ಅಧ್ಯಕ್ಷರು: ಶ್ರೀಮತಿ ಈರಮ್ಮ
- ಉಪಾಧ್ಯಕ್ಷರು: ಶ್ರೀ ಬಸನಗೌಡ ಮೂರಾಳ
- ಖಜಾಂಚಿ: ಶ್ರೀ ಸಂತೋಷ್
- ತಾಲೂಕು ಸಂಘಟನಾ ಕಾರ್ಯದರ್ಶಿ: ಶ್ರೀ ಜಹೀರ್
- ಜಿಲ್ಲಾ ಸಂಘಟನಾ ಕಾರ್ಯದರ್ಶಿ: ಶ್ರೀ ಸೋಮಶೇಖರ್
- ಪ್ರಧಾನ ಕಾರ್ಯದರ್ಶಿ: ಶ್ರೀ ಶಂಕರ
- ತಾಲೂಕು ಮಹಿಳಾ ಸಂಘಟನಾ ಕಾರ್ಯದರ್ಶಿ: ಶ್ರೀಮತಿ ಪ್ರೇಮಾ ರಾಠೋಡ
೨. ಶಹಾಪುರ ತಾಲೂಕು ಪದಾಧಿಕಾರಿಗಳ ಪಟ್ಟಿ:
ಶಹಾಪುರ ತಾಲೂಕಿನ ನೂತನ ಪದಾಧಿಕಾರಿಗಳಾಗಿ ಕೆಳಗಿನವರು ಆಯ್ಕೆಯಾಗಿದ್ದು, ಸಂಘದ ಬಲವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
- ಗೌರವಾಧ್ಯಕ್ಷರು: ಶ್ರೀ ಸಿದ್ರಾಮಪ್ಪ ಕ್ಯಾತನಟ್ಟಿ
- ಅಧ್ಯಕ್ಷರು: ಶ್ರೀ ದೇವರಾಜ ಗೋನಾಲ
- ಉಪಾಧ್ಯಕ್ಷರು: ಶ್ರೀ ರೆಡ್ಡಿರೇವು ನಾಯಕ ಹಾಗೂ ಶ್ರೀ ಮಡಿವಾಳಪ್ಪ
- ಖಜಾಂಚಿ: ಶ್ರೀ ನರಸಪ್ಪಗೌಡ
- ತಾಲೂಕು ಸಂಘಟನಾ ಕಾರ್ಯದರ್ಶಿ: ಶ್ರೀ ಹಣಮಂತ ದೇವರಮನಿ
- ಜಿಲ್ಲಾ ಸಂಘಟನಾ ಕಾರ್ಯದರ್ಶಿ: ಶ್ರೀ ಬೂದೇಪ್ಪ ಯಾದವ
- ಪ್ರಧಾನ ಕಾರ್ಯದರ್ಶಿ: ಶ್ರೀ ರಮೇಶ ನಾಯಕ
- ತಾಲೂಕು ಮಹಿಳಾ ಸಂಘಟನಾ ಕಾರ್ಯದರ್ಶಿ: ಶ್ರೀಮತಿ ಲಕ್ಷ್ಮೀ ಪಾಟೀಲ್
ಅಭಿನಂದನೆಗಳು:
"ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೂ ಹಾರ್ದಿಕ ಅಭಿನಂದನೆಗಳು. ಸಂಘಟನೆಯ ಏಳಿಗೆಗಾಗಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡೋಣ" ಎಂದು ಜಿಲ್ಲಾಧ್ಯಕ್ಷರು ಮಲ್ಲಿಕಾರ್ಜುನ ಯಾದಗಿರಿ ಅವರು ಹಾರೈಸಿದ್ದಾರೆ.
No comments:
Post a Comment