ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರೀಯ ಹಬ್ಬಗಳು, ಸಾಂಸ್ಕೃತಿಕ ಹಾಗೂ ಆಡಳಿತಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭದಲ್ಲಿ ಮಕ್ಕಳ ಮತ್ತು ಸಾರ್ವಜನಿಕರ ರಕ್ಷಣೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕ ಸರ್ಕಾರವು ಆದೇಶಿಸಿದೆ
ಪ್ರಮುಖ ಮಾರ್ಗಸೂಚಿಗಳು:
ಧ್ವಜಾರೋಹಣ ಸಂದರ್ಭದಲ್ಲಿ ಎಚ್ಚರಿಕೆ: ಧ್ವಜಸ್ತಂಭದ ಬಳಿ ಯಾವುದೇ ವಿದ್ಯುತ್ ತಂತಿಗಳು ಹಾದುಹೋಗದಂತೆ ಗಮನಹರಿಸಬೇಕು
. ಧ್ವಜವನ್ನು ಏರಿಸಲು ಅಥವಾ ಇಳಿಸಲು ಮಕ್ಕಳನ್ನು ಬಳಸಬಾರದು ಮತ್ತು ಧ್ವಜ ಸಿಕ್ಕಿಕೊಂಡರೆ ಮಕ್ಕಳನ್ನು ಕಂಬ ಹತ್ತಿಸಬಾರದು . ವಿದ್ಯುತ್ ಸುರಕ್ಷತೆ: ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವಿದ್ಯುತ್ ತಂತಿಗಳಿಂದ ವಿದ್ಯುತ್ ಪ್ರವಹಿಸದಂತೆ ಮತ್ತು ಅವು ಮಕ್ಕಳ ಸಂಪರ್ಕಕ್ಕೆ ಬಾರದಂತೆ ತಜ್ಞರ ಮೂಲಕ ಪರಿಶೀಲಿಸಬೇಕು
. ಮಳೆ ನೀರು ವಿದ್ಯುತ್ ಸಂಪರ್ಕದ ಮೇಲೆ ಬೀಳದಂತೆ ಜಾಗ್ರತೆ ವಹಿಸಬೇಕು . ವಾಹನಗಳ ಪರಿಶೀಲನೆ: ಮಕ್ಕಳನ್ನು ಕರೆದೊಯ್ಯುವ ವಾಹನಗಳು ಸುಸ್ಥಿತಿಯಲ್ಲಿರಬೇಕು
. ಚಾಲಕರು ಮದ್ಯಪಾನ ಮಾಡಿರಬಾರದು ಮತ್ತು ನಿಗದಿತ ವೇಗಮಿತಿಯಲ್ಲಿ ಚಲಿಸಬೇಕು . ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಏರಿಸುವಂತಿಲ್ಲ . ಆಹಾರ ಮತ್ತು ನೀರಿನ ಶುಚಿತ್ವ: ಮಕ್ಕಳಿಗೆ ನೀಡುವ ಆಹಾರ, ಪಾನೀಯ ಮತ್ತು ನೀರಿನ ಗುಣಮಟ್ಟವನ್ನು ಸಂಯೋಜಕರು ಖತರಿಪಡಿಸಿಕೊಂಡ ನಂತರವೇ ವಿತರಿಸಬೇಕು
. ಅಡುಗೆ ಮಾಡುವ ಸ್ಥಳಕ್ಕೆ ಮಕ್ಕಳ ಪ್ರವೇಶ ನಿರ್ಬಂಧಿಸಬೇಕು . ತುರ್ತು ಸಿದ್ಧತೆ: ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ಹಿರಿಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತರಬೇತಿ ನೀಡಬೇಕು
. ಕಾರ್ಯಕ್ರಮದ ಬಗ್ಗೆ ಸ್ಥಳೀಯ ಪೊಲೀಸ್, ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ಕೇಂದ್ರಗಳಿಗೆ ಮುಂಚಿತವಾಗಿ ಮಾಹಿತಿ ನೀಡುವುದು ಕಡ್ಡಾಯವಾಗಿದೆ .
ಸ್ಥಳೀಯ ಆಡಳಿತಗಳು ಮತ್ತು ಶಾಲಾ ಅಭಿವೃದ್ಧಿ ಸಮಿತಿಗಳು (SDMC) ಈ ಕಾರ್ಯಕ್ರಮಗಳ ಮೇಲ್ವಿಚಾರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಸರ್ಕಾರ ನಿರ್ದೇಶಿಸಿದೆ

No comments:
Post a Comment