ಬೆಂಗಳೂರು: ಅಪಘಾತ ಅಥವಾ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಸಾರ್ವಜನಿಕರು (ಗುಡ್ ಸಮರಿಟನ್) ಮತ್ತು ವೈದ್ಯಕೀಯ ವೃತ್ತಿಪರರ ರಕ್ಷಣೆಗಾಗಿ ಕರ್ನಾಟಕ ಸರ್ಕಾರವು ಹೊಸ ನಿಯಮಾವಳಿಗಳನ್ನು ಪ್ರಕಟಿಸಿದೆ
1. ಗುಡ್ ಸಮರಿಟನ್ ನಿಧಿ ಮತ್ತು ಧನಸಹಾಯ
ಸಂಕಷ್ಟದಲ್ಲಿರುವವರಿಗೆ ನೆರವಾಗುವವರಿಗಾಗಿ ವಿಶೇಷ **'ಗುಡ್ ಸಮರಿಟನ್ ನಿಧಿ'**ಯನ್ನು ಸ್ಥಾಪಿಸಲಾಗುವುದು
ಸಾರ್ವಜನಿಕರಿಂದ ಸ್ವಯಂಪ್ರೇರಿತ ದೇಣಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಸಿಎಸ್ಆರ್ (CSR) ನಿಧಿ
. ನೋಂದಾಯಿತ ಸಂಘ ಸಂಸ್ಥೆಗಳಿಂದ ಬರುವ ಕೊಡುಗೆಗಳು
. ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರ ಮತ್ತು ಇತರ ಸರ್ಕಾರಿ ಯೋಜನೆಗಳ ಅನುದಾನ
.
2.ಚಿಕಿತ್ಸಾ ವೆಚ್ಚ ಮರುಪಾವತಿ
ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಿದ ಆಸ್ಪತ್ರೆಗಳು ತಮ್ಮ ವೆಚ್ಚವನ್ನು ಮರುಪಾವತಿ ಮಾಡಿಕೊಳ್ಳಲು ಈ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ:
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ABArK) ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳಿಗೆ ಯೋಜನೆ ನಿಗದಿಪಡಿಸಿದ ದರದಲ್ಲಿ ಪೂರ್ಣ ಮರುಪಾವತಿ ಮಾಡಲಾಗುವುದು
. ನೋಂದಾಯಿತವಲ್ಲದ ಆಸ್ಪತ್ರೆಗಳಿಗೂ ಸಹ ನಿಯಮಾನುಸಾರ ವೆಚ್ಚ ಭರಿಸಲಾಗುವುದು
. ಒಂದು ವೇಳೆ ಮರುಪಾವತಿ ಮೊತ್ತ ಕಡಿಮೆ ಎನಿಸಿದರೆ, ಆಸ್ಪತ್ರೆಗಳು ಆರೋಗ್ಯ ಇಲಾಖೆಯ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಬಹುದು
.
ನ್ಯಾಯಾಲಯಕ್ಕೆ ಹಾಜರಾಗುವವರಿಗೆ ಭತ್ಯೆ
ಸಹಾಯ ಮಾಡಿದ ವ್ಯಕ್ತಿ (ಗುಡ್ ಸಮರಿಟನ್) ಸಾಕ್ಷ್ಯ ನುಡಿಯಲು ದೂರದ ಊರಿನಿಂದ ನ್ಯಾಯಾಲಯಕ್ಕೆ ಬರಬೇಕಾದ ಸಂದರ್ಭದಲ್ಲಿ, ಅವರ ಪ್ರಯಾಣ ವೆಚ್ಚ ಮತ್ತು ಸಂಭಾವನೆಯು 100 ರೂಪಾಯಿಗಳಿಗಿಂತ ಹೆಚ್ಚಿದ್ದರೆ, ಅಂತಹ ಹೆಚ್ಚುವರಿ ಮೊತ್ತವನ್ನು ನಿಧಿಯಿಂದ ಪಾವತಿಸಲು ನ್ಯಾಯಾಲಯವು ಆದೇಶಿಸಬಹುದಾಗಿದೆ
4. ಗುಡ್ ಸಮರಿಟನ್ ಪ್ರಶಸ್ತಿ
ಪರರಿಗೆ ನೆರವಾಗುವ ಮಾನವೀಯ ಕಾರ್ಯವನ್ನು ಉತ್ತೇಜಿಸಲು ಪ್ರತಿ ವರ್ಷ ಜನವರಿ 26 ರಂದು 'ಗುಡ್ ಸಮರಿಟನ್' ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು
5.ದೂರು ಮತ್ತು ಮೇಲ್ಮನವಿ
ಜಿಲ್ಲಾಧಿಕಾರಿಗಳು: ಈ ಕಾಯಿದೆಯಡಿ ಸಂಬಂಧಪಟ್ಟ ಕಂದಾಯ ಜಿಲ್ಲೆಯ ಜಿಲ್ಲಾಧಿಕಾರಿಗಳು 'ಸೂಕ್ತ ಪ್ರಾಧಿಕಾರ'ವಾಗಿ ಕಾರ್ಯನಿರ್ವಹಿಸಲಿದ್ದಾರೆ
. ಮೇಲ್ಮನವಿ ಪ್ರಾಧಿಕಾರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅಥವಾ ಕಾರ್ಯದರ್ಶಿಗಳು ಮೇಲ್ಮನವಿ ಪ್ರಾಧಿಕಾರವಾಗಿರುತ್ತಾರೆ. - ಈ ಕರಡು ನಿಯಮಗಳ ಬಗ್ಗೆ ಸಾರ್ವಜನಿಕರು ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ, ಅಧಿಸೂಚನೆ ಪ್ರಕಟವಾದ 15 ದಿನಗಳ ಒಳಗಾಗಿ ಬೆಂಗಳೂರಿನ ವಿಕಾಸ ಸೌಧದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಬಹುದಾಗಿದೆ
.